ಶುಕ್ರವಾರ, ಜುಲೈ 24, 2009

ಅರ್ಪಣೆ!!!


ಮುಂಗಾರು ಮಳೆಯ ಅಬ್ಬರದ ದಿನಗಳಲ್ಲಿ ಇಳಿಸಂಜೆಯ ಜಡೆ ಮಳೆಯಂತೆ ನನ್ನ ಬದುಕಿನಲಿ ನಡೆದು ಬಂದು, ತನ್ನ ಪುಟ್ಟ ಪುಟ್ಟ ಹೆಜ್ಜೆ ಗುರುತುಗಳನ್ನು ನನ್ನ ಎದೆಯ ಮೇಲೆ ಉಳಿಸಿ ಹೊಸ ಅಭಿಸಾರಿಕೆಗೆ ಮತ್ತು ಅವಳ ಮೇಲಿರುವ ಅನನ್ಯ ಪ್ರೀತಿಗೆ...

ಗುರುವಾರ, ಜುಲೈ 23, 2009

ಮೊದಲ ಹೆಜ್ಜೆ …


ಹಾಯ್,
ನಾನು ಗಿರೀಶ್, ಊರು ಉತ್ತರ ಕರ್ನಾಟಕದ ಬಯಲುಸೀಮೆ ಸದ್ಯಕ್ಕೆ ಬೆಂಗಳೂರಿನಲ್ಲಿ ಕೆಲಸ, ವಾಸ. ಅದಕ್ಕೆ ನನಗೆ ಮಳೆ ಅಂದ್ರೆ ಮಲೆನಾಡು ಅಂದ್ರೆ ಸತ್ತು ಹೋಗೋಷ್ಟು ಇಷ್ಟ . ಮೂಲತಃ ನಾನು ಕವಿಯಲ್ಲ , ಸಾಹಿತಿಯಲ್ಲ ! ಆದರೆ ಈ ಬದುಕಿನ ಕ್ಷಣ ಕ್ಷಣ ವನ್ನೂ ಸಂತೋಷದಿಂದ ಅನುಭವಿಸುವ ಆಸೆಹೊತ್ತ ಭಾವುಕಜೀವಿ , ಅಲೆಮಾರಿ , ಅಂತರ್ಮುಖಿ , ನಿಸರ್ಗ ಪ್ರೇಮಿ , ಹಾಡುಗಳ ಹುಚ್ಚ , ಅಕ್ಷರಗಳ ಕಡು ವ್ಯಾಮೋಹಿ ಹೀಗೆ ಇನ್ನು ಏನೇನೋ … ನಾನೇನು ಅಂತ ಇವತ್ತಿನವರೆಗೂ ನಂಗೇ ಅರ್ಥ ಆಗದ ಹೆಬ್ಬಂಡೆ!!!


"ಮಳೆಯಲ್ಲಿ ನೆನೆದರೆ ಮನಸು ಕೊಳೆಯಾಗುವದಿಲ್ಲವಂತೆ!!! ಅಂತಹ ಮನಸು ಕೊಳೆಯಾಗದ ಮಳೆಯಲ್ಲಿ ನಿರಂತರ ನಡೆಯುವಾ ಎನ್ನುತ್ತಾ …
ಮಳೆ ಪಯಣಕ್ಕೆ ಸ್ವಾಗತ..."