ಸೋಮವಾರ, ಡಿಸೆಂಬರ್ 12, 2011

ವಿದಾಯ...


ನಂಬಿಕೆಗೆ ದ್ರೋಹ ಬಗೆಯುವ
ಸುಂದರ ಪದ

ಸ್ಥಬ್ದ ಕೊಳಲು!!!

ಸೋನು,
ಸುಂದರ ಮಳೆಗಾಲ ಮುಗಿದು, ಮೈ ನಡುಗಿಸುವ ಚಳಿ ಎದುರಾದರೂನ ಯಾಕೋ ಮನದಲಿ ತುಂಬಿ ನಿಂತ ವಿಷಾಧವೆ ಮರೆಯಾಗ್ತಿಲ್ಲ. ಈ ಬದುಕಿನಲಿ ಕಷ್ಟವಿರಬೇಕು ಇಲ್ಲಾ ಸುಖವಿರಬೇಕು. ಎರಡೂ ಇಲ್ಲದ ನಿಂತ ನೀರಿನಂತಾಗಿದೆ ಬದುಕು. ಕಷ್ಟ-ಮೈಮರೆಯಲು ಅವಕಾಶ ಕೊಡದ ಅತ್ತೆ. ಸುಖ-ಜಗತ್ತೇ ಮರೆತು ಹೋಗುವ ಅಮ್ಮನ ಮಡಿಲು. ಎರಡೂ ಇಲ್ಲದೆ ಯಾವ ಚಲನೆಯೂ ಇಲ್ಲದೆ ಸಮುದ್ರದ ದಡದಲ್ಲಿ ಎದ್ದು ನಿಂತ ಬಂಡೆಯಂತಾಗಿದ್ದೇನೆ!
ಹೊಸ ಕಷ್ಟಗಲಿಲ್ಲದೆ, ಸವಾಳುಗಲಿಲ್ಲದೆ, ಆ ಸವಾಲುಗಳ ಗೆದ್ದ ಖುಷಿ ಇಲ್ಲದೆ ಬಲು ಬೋರಾಗಿದೆ ಕಣೆ. ಏಳಬೇಕು, ಎದ್ದು ನಿಂತು ಚುಮು ಚುಮು ಚಳಿಯಲಿ ಅರಳುವ ಸೂರ್ಯೋದಯ ನೋಡಬೇಕು. ಬದುಕು ಮತ್ತೆ ಮೊದಲಿನಂತಾಗಬೇಕು. ಹೊಸ ಆಸೆ, ಕನಸು, ಕಸುವು, ಹುಮ್ಮಸ್ಸು ಸಕಲವೂ ಮೈದೆಳೆದು ಧೂಳಿನಿಂದ ಎದ್ದು ಬರಬೇಕು.
ಬಹು ದೂರದಲ್ಲಿದ್ದರು ತನ್ನ ಇರುವಿಕೆಯ ತೋರುವ ಧಗಧಗಿಸುವ ಸೂರ್ಯನಂತೆ ನಿನ್ನ ನೆನಪು ಕೂಡಾ ಮನದಲ್ಲಿ ನೋವಿನ ಹೂ ಅರಳಿಸಿ ನಗುತಲಿದೆ: ನಿನ್ನಂತೆ! ಅದೇ ಹೂವಿನ ಸುಗಂಧದೊಂದಿಗೆ ನನ್ನ ನಿತ್ಯದ ಬೆಳಗು ಮೂಡುತಿದೆ.
ಎಲ್ಲೇ ಇರು  ಹೇಗೆ ಇರು
ಎಂದೆಂದೂ ಮನದಲಿ
ನೀ ತುಂಬಿರು...
"ಇಲ್ಲವುಗಳ ಮಧ್ಯೆಯೇ ಎಲ್ಲವೂ ಹುಟ್ಟುವದು" ಎಂಬ ಕವಿವಾಣಿಯಂತೆ, ನೀನು ಇಲ್ಲದ ಜೀವನವನ್ನು ಸ್ಥಿರವಾಗಿಟ್ಟುಕೊಳ್ಳಲು ಒದ್ದಾಡುತ್ತಲೇ ಇದ್ದೇನೆ. ಅದೇಕೋ ಸಾಧ್ಯವಾಗ್ತಿಲ್ಲ! ಬಿಟ್ಟು ಹೋಗಿ ಇಷ್ಟು ವರ್ಷಗಳಾದರೂ ಯಾಕೆ ನನ್ನ ಮನದ ಮೂಲೆಯಲ್ಲೆಲ್ಲೋ ಕುಳಿತು ಹೀಗೆ ಕಾಡುತಿರುವೆ ಹುಡುಗಿ? ನಾವು ಕಟ್ಟಿದ ಗುಬ್ಬಿಯ ಗೂಡಿನೋಳಗಿಂದ ಮರಿಯೊಂದು ಜಾರಿ ಬಿದ್ದು ಸತ್ತು ಹೋಯಿತಂತೆ! ಬಿದ್ದು ಹೋದದ್ದು ಮರಿಯೋ ಅಥವಾ ಮರಿಯಾಗಬೇಕಿದ್ದ ಮೊಟ್ಟೆಯೋ? ಗೊತ್ತಿಲ್ಲ!
ನಾನಂತೂ ಮುರಿದು ಬಿದ್ದ ಕೊಳಲಿನಂತಾಗಿದ್ದೇನೆ!!! ಇನ್ನ್ಯಾವ ಸ್ವರವೂ ಮೂಡದ  ಸ್ಥಬ್ದ ಕೊಳಲು...!!!