ಶುಕ್ರವಾರ, ಏಪ್ರಿಲ್ 01, 2011

ಯುಗಾದಿ


ಕೊರೆಯುವ ಚಳಿಯಿಂದ ಬೇಯುವ ಬೇಗೆ! ವಸಂತ ಋತುವಿನ ಹಾಡಿನೊಂದಿಗೆ ಚೈತ್ರದ ಚಿಗುರಿನ ಜನನ! ಬೋಳಾದ ರೆಂಬೆ-ಕೊಂಬೆಗಳಲಿ ಹೊಸ ಚಿಗುರು ಮೈದೆಳೆಯುವ ಪರಿ. ಇದು ಪ್ರಕೃತಿ ಬರೆದ ಭಾಮಿನಿ ಷಟ್ಪದಿ!! ಗಿಡ, ಮರ, ಬಳ್ಳಿಗಳಲ್ಲಿ ಹೂ ಬಿರಿಯುವ ಹೊತ್ತು. ಹಳದಿ, ಕೆಂಪು, ನೇರಳೆ, ಬಣ್ಣ ಬಣ್ಣದ ಹೂವು ಮುಡಿಯುವ ಪ್ರಕೃತಿಗೆ ಹರೆಯ ಮೂಡುವ ಕಾಲ.

ಯುಗಾದಿ ಎಂದರೆ ನೆನಪಾಗುವ ಕವಿ ಬೇಂದ್ರೆ-"ಯುಗ ಯುಗಾದಿ ಕಳೆದರೂ ಯುಗಾದಿ ಮರಳಿ ಬರುತಿದೆ/ಹೊಸ ವರುಷಕೆ ಹೊಸ ಹರುಷವ ಹೊಸತು ಹೊಸತು ತರುತಿದೆ" ಎಂದು ಅಭಿಮಾನದಿಂದ ಹಾಡಿದ ಕವಿ. ಈ ಸಂದರ್ಭದಲಿ ಎಲ್ಲಕ್ಕೂ ಹೊಸತನ, ಹೊಸ ಚೈತನ್ಯ, ಹೊಸ ಕಳೆ. ಹಳೆಯದನ್ನು ಕಳಚಿಕೊಂಡು ಹೊಸದನ್ನು ತೊಡುವ ಪ್ರಕೃತಿಯ ನೀತಿ ಎಲ್ಲರಿಗೂ ಆದರ್ಶ, ಮಾದರಿ.

ಪ್ರಕೃತಿಯಂತೆಯೇ ನಮ್ಮ ಮನದಲ್ಲೂ ಹೊಸ ಗರಿಕೆ ಮೂಡಲಿ.

ಇನಿತು ಕಹಿಗೆ ಬೊಗಸೆ ಸಿಹಿ ಇರಲಿ!

ಯುಗಾದಿ ಹಬ್ಬದ ಶುಭಾಶಯಗಳು.

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ