ಮಂಗಳವಾರ, ಮೇ 10, 2011

ಏಕಾಂಗಿ ನವಿಲು...

ಯಾರೂ ನೋಡದ ಕಾಡಿನ ಬಯಲಲಿ, ತನ್ನ ಪರಿವಾರವನ್ನೆಲ್ಲ ಮರೆತು, ಮಳೆಯ ಆಗಮನಕ್ಕೆ ಕಾಯುವ ಮಯೂರ. ಅದಕ್ಕೆ ಮಳೆ ಬರುವ ಮುನ್ಸೂಚನೆ ಇತ್ತಾ? ಅಥವಾ ಇದರ ಕರೆಗೆ ಅದು ಧರೆಗಿಳಿಯಿತಾ? ಗೊತ್ತಿಲ್ಲ. ಬಹುದಿನಗಳ ನಂತರ ಪ್ರಿಯತಮನ ಮುಖ ನೋಡಲು ಬಾಗಿಲ ಮರೆಯಲಿ ನಿಂತ ಷೋಡಶಿಯಂತೆ!! ಅದು ಕಾಯುತ್ತಲೇ ಇತ್ತು.
ಮಯೂರನ ಕರೆಗೆ ಓಗೊಟ್ಟು ಸುರಿದ ಮಳೆ! ಅದು ಮಯೂರ ಮಳೆ!! ಬದುಕಿನ ಎಲ್ಲ ಜಡತ್ವ ತೊರೆದು, ಹೊಸ ತಳಿರು-ತೋರಣಗಳಿಂದ ಅಲಂಕರಿಸಿ ಬರಮಾಡಿಕೊಳ್ಳುವ ಹಬ್ಬದಂತೆ. ಮಳೆ ಬರುವ ವರೆಗೂ ಅದು ನಿಂತೇ ಇತ್ತು. ಪ್ರಿಯತಮೆಗೆ ಮಾತು ಕೊಟ್ಟ ಮುಗ್ದ ಹುಡುಗನಂತೆ!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ