ಶನಿವಾರ, ಅಕ್ಟೋಬರ್ 23, 2010

ಎಲ್ಲಿರುವೆ?


ಯಾವ ಸಪ್ತ ಸಾಗರದಾಚೆ?
ಬೆಳಗಿನಿಂದ ಇಳಿ ಸಾಯಂಕಾಲದ
-ವರೆಗೂ ಗಿಜಿಗುಡುವ
ಈ ಅಸಹ್ಯ ವಾಸನೆಯ
ಬೆಂಗಳೂರಿನಲ್ಲಿ...
ಕೊಡು-ಕೊಳ್ಳುವಿಕೆಯೇ
ಜೀವನವೆಂದು,
ಭಾವನೆಗಳಿಗೆ ಬೆಲೆಯೇ
ಇಲ್ಲವೆಂದು ನಂಬಿ
ಅಷ್ಟೆತ್ತರಕೆ
ತಲೆ ಎತ್ತಿ ನಿಂತ
ಶಾಪಿಂಗ್ ಮಾಲ್ ಗಳಲಿ...
ಯಾರು ಬಿದ್ದರೂ
ಯಾರು ಸತ್ತರೂ
ತನಗೇನು
ಸಂಭಂದವೇ ಇಲ್ಲ
-ವೆಂದು ಓಡುತ್ತಲೇ ಇರುವ
ಟ್ರಾಫಿಕ್ಕಿನಲಿ...
ಭಾರತದ ಜನಸಂಖ್ಯೆಗೆ
ಜೀವಂತ ನಿದರ್ಶನ
-ದಂತಿರುವ ಗಿಜಿಗಿಜಿ
ಬಿ.ಎಂ.ಟಿ.ಸಿ ಬಸ್ಸಿನಲ್ಲಿ...
ಬಸ್ಸಿನ ಕಿಡಕಿಯಲಿ...
ಪ್ರತಿಸಲ ಹೊರಗೆ
ಹೋಗುವಾಗಲು
ದಾಟಿ ಹೋಗುವ
ಬೀದಿ ತಿರುವಿನ
ಪಾನಿ ಪುರಿ
ಅಂಗಡಿಯಲಿ...
ಏನು ಮಾಡಿದರೂ
ಯಶಸ್ಸು ಸಿಗದೇ
ಸೋತು ಮರಳುವ
ನಿರಾಶೆಯಲಿ...
ಜಗತ್ತಿನ ಎಲ್ಲ
ಜಂಜಡಗಳು ಮುಗಿದು
ಮನದಲಿ ಸ್ಥಾಪಿತವಾಗುವ
ಸ್ನಿಗ್ದ ಮೌನದಲಿ...
ಹಕ್ಕಿಯೊಂದು ಕುಳಿತು
ಹಾರಿ ಹೋದ ಮರದ ರೆಂಬೆಯ
ಮರ್ಮರದಲಿ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ