ಗುರುವಾರ, ಜೂನ್ 10, 2010

ತೋಚಿದ್ದು...

ಏನು ಬರೆಯಲಿ?
ಹೇಗೆ ಬರೆಯಲಿ?
ಇನ್ನೊಬ್ಬರ ಕೈ ಗೊಂಬೆಯಾಗಿ
ಋಣದ ಹೊರೆಯಾಗಿ
ಅಸಾಧ್ಯ!!

ಉಹೂ ಕೈಯಲ್ಲಿ ಶಕ್ತಿ ಸಾಲದಾಗಿದೆ. ಮನಸು ಯಾಕೋ ಮುಜುಗರಕ್ಕೊಳಗಾಗಿದೆ. ಈ ನನ್ನ ಪರಸ್ಥಿತಿ ಶತ್ರುವಿಗೂ ಬೇಡ.
ಬರಿ ವಿಷಾದದ ಬೆಳಗು
ಏನು ಘಟಿಸದ ಮದ್ಯಾನ್ಹ
ಸುಮ್ಮನೆ ಸಾಯುತಿರುವ ಸಂಜೆ!!
ಯಾವುದು ಚೈತನ್ಯ ತುಂಬುತ್ತಿಲ್ಲ. ಎಲ್ಲಿ ಹೀಗೇ ಹೊರ ಜಗತ್ತಿಗೆ ಕಾಣದೇ ಮಣ್ಣು ಸೇರುತ್ತೇನೋ ಎಂಬ ದುಗುಡ.
ಇಡೀ ಮನಸೇ ವಿಷಾದದಿಂದ ತುಂಬಿ ನಿಂತಿರುವಾಗ, ಚಿಪ್ಪೆಲ್ಲಿ, ಸ್ವಾತಿ ಮುತ್ತೆಲ್ಲಿ? ದಿಗದಿಗಂತದಾಚೆಗೂ ಚಾಚಿ ನಿಂತಿರುವ ಸತ್ತ ಸಮುದ್ರದಂತೆ!! ನೀನು ಏನು ಹೇಳದೆ, ಕೇಳದೆ ಕಲ್ಲಗಿರುವಾಗ ನನ್ನ ಕಷ್ಟವನ್ನೆಲ್ಲಾ ಯಾರಿಗೆ ಹೇಳಿಕೊಳ್ಳಲಿ?

ಹೆಂಡತಿಯಾಗಿದ್ದರೆ ಸಾಂತ್ವನಿಸುತ್ತಿದ್ದೆ,
ಪ್ರೇಯಸಿಯಾಗಿದ್ದರೆ ಧೈರ್ಯ ಹೇಳುತ್ತಿದ್ದೆ,
ಗೆಳತಿಯಾಗಿದ್ದರೆ ಆಸರೆಯಾಗುತ್ತಿದ್ದೆ,
ದೇವತೆಯಾಗಿದ್ದರೆ ಕೈ ಹಿಡಿದು ಕಾಪಾಡುತ್ತಿದ್ದೆ,
ನೀನು!
ಏನೂ ಅಲ್ಲದಿರುವದಕ್ಕೆ,
ಫೋನು ಎತ್ತಿಟ್ಟು ನಿದ್ದೆ ಮಾಡಿದ್ದೆ!!!

ಕಗ್ಗತ್ತಲ ದಾರಿ ಮುಕ್ಕಾಲು ಸರಿದಿದೆ. ದೂರದಲ್ಲೆಲ್ಲೋ ಬೆಳಕಿನ ಬಿಜ ಮೂಡಿ ಬರುವ ಭರವಸೆ. ಇನ್ನು ದೂರವಿಲ್ಲ ಈ ವಿಷಾದ, ಬೇಸರ, ಋಣಭಾರ ಎಲ್ಲವೂ ನೀಗಿ, ನನ್ನದೇ ಹೊಸ ಬೆಳಕು, ಬಾಳು, ತಳಕು, ಬಳಕು, ಹಸಿರು, ಉಸಿರು, ತುಂತುರು ಬರುವದು ತಡವಿಲ್ಲ.
cheer up ಮನಸೇ...

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ