ಬುಧವಾರ, ಜೂನ್ 16, 2010

ಲಹರಿ...

ಬೆಂದಕಾಳೂರಿನಲ್ಲಿ ಇನ್ನೊಂದು ಮಳೆಯ ಸಂಜೆ! ತುಂಬಿ ತುಳುಕುವ ರಸ್ತೆಗಳಲ್ಲಿ ಲಕ್ಷಾಂತರ ಅಪರಿಚಿತ ಮುಖಗಳು. ಬೆಳಿಗ್ಗೆ ಯಿಂದ ದುಡಿದು,ದಣಿದು ಗೂಡು ಸೇರಿಕೊಳ್ಳುವ ಈ ಸಮಯದಲ್ಲಿ, ನಾನೊಬ್ಬನೇ ಕುಳಿತ ಪಾರ್ಕಿನ ಕಲ್ಲು ಬೆಂಚಿನ ಹಿಂದಿರುವ ಮರಗಳ ಮರೆಯಲಿ ಕುಳಿತ ಜೋಡಿಯೊಂದು ಪಿಸುಗುಡುತ್ತಿತ್ತು.
ಮಳೆಗಾಲ ಯಾವಾಗಲೂ ಪ್ರೇಮಿಗಳ ಕಾಲ. ಎದೆಯ ಆಕಾಶದಲಿ ತಾಪದಿಂದ ಹೆಪ್ಪುಗಟ್ಟಿದ ಪ್ರೀತಿ, ಭೂಮಿಗೆ ಆವಿರ್ಭವಿಸುವ ರಮ್ಯ ಕಾಲ!!
ಒಂದು ಇಳಿಸಂಜೆಯ ಜಡಿ ಮಳೆಯಲಿ ಪ್ರೀತಿಸುವ ಜೀವದ ಜೊತೆ ಒಂದು ವಾಕ್!!! ಅದು ಬದುಕಿನ ಕೊನೆಯ ಕ್ಷಣದವರೆಗೂ ನೆನಪಿನ ಖಜಾನೆಯಲ್ಲಿ ಅಚ್ಚಳಿಯದೆ ಉಳಿಯುವ ಮಧುರ ನೆನಪು!! ಮಳೆಯಲಿ... ಜೊತೆಯಲಿ!!!
ಮಳೆ! ಎಷ್ಟೇ ಹತೋಟಿಯಲ್ಲಿಟ್ಟುಕೊಂಡರೂ ನೀನಿಲ್ಲದ ಮನದ ಬೇಗುದಿ, ತಳಮಳ ಎಲ್ಲವನ್ನೂ ಅಭಿವ್ಯಕ್ತಿಸಲು ಸಿಗುವ ಏಕೈಕ ದಾರಿ. ಹೌದು ಮಳೆಗೆ ಮಾತ್ರ ಮನಸಿನ ಕೊಳೆ ತೊಳೆಯುವ ಶಕ್ತಿ ಇದೆ. ಅದು ನೊಂದು ಬೇರೆಯಾದ ಎರಡು ಜೀವಗಳನ್ನು ಜೋಡಿಸುವ ಅದ್ಭುತ ಔಷಧಿ! ಆದರೆ ಆ ಔಷಧಿಯ ಪರಿಣಾಮಕ್ಕಿಂತಲೂ ಘೋರ ಸ್ಥಿತಿಗೆ ಇಳಿದ ನಮ್ಮ ಪ್ರೀತಿ!!!

ಕಾಮೆಂಟ್‌ಗಳಿಲ್ಲ:

ಕಾಮೆಂಟ್‌‌ ಪೋಸ್ಟ್‌ ಮಾಡಿ